Share This News

ಶ್ರೀರಂಗಪಟ್ಟಣ ಪ್ರಜ್ಞಾವಂತರ ವೇದಿಕೆ ವತಿಯಿಂದ ವಿಶ್ವ ಸೈಕಲ್ ದಿನ ಆಚರಣೆ ಅಂಗವಾಗಿ ಶ್ರೀರಂಗಪಟ್ಟಣದ ನ್ಯಾಯಾಲಯಕ್ಕೆ ಸೈಕಲ್ ತುಳಿದ ವಕೀಲ ಸಿ.ಎಸ್. ವೆಂಕಟೇಶ್ ಅವರ ಅಭಿಪ್ರಾಯ“ವಿಶ್ವ ಸೈಕಲ್ ದಿನದಂದು ನ್ಯಾಯಾಲಯಕ್ಕೆ ಸೈಕಲ್ ತುಳಿದು ಬಂದ ಉದ್ದೇಶ ಸಂದೇಶ ಕೊಡುವುದೇ ಹೊರತು ಪ್ರದರ್ಶನವಲ್ಲ.

ಸೈಕಲ್ ಎಂದರೆ ಅದು ಆರೋಗ್ಯ, ಅದು ಉಳಿತಾಯ, ಅದು ಪರಿಸರ. ನ್ಯಾಯದ ಪರವಾಗಿ ವಾದಿಸುವ ನಾವು, ನಾಳಿನ ಪೀಳಿಗೆಗೆ ಸ್ವಚ್ಛ ಗಾಳಿ ಕೊಡುವ ಜವಾಬ್ದಾರಿಯನ್ನೂ ವಹಿಸಬೇಕು. ದಿನಕ್ಕೆ ಒಂದೆರಡು ಕಿಲೋಮೀಟರ್ ಸೈಕಲ್ ಬಳಸಿದರೆ ಪೆಟ್ರೋಲ್ ಉಳಿಯುತ್ತದೆ, ದೇಹ ದಂಡಿಗೆ ಸಿಗುತ್ತದೆ, ನಗರಕ್ಕೆ ಟ್ರಾಫಿಕ್ ಕಡಿಮೆಯಾಗುತ್ತದೆ.

ಶ್ರೀರಂಗಪಟ್ಟಣ ಪ್ರಜ್ಞಾವಂತರ ವೇದಿಕೆ ಈ ಅಭಿಯಾನ ಆರಂಭಿಸಿದ್ದು ಒಳ್ಳೆಯ ಹೆಜ್ಜೆ. ವಕೀಲರಾದ ನಾವೇ ಬದಲಾವಣೆಗೆ ಮುಂದಾದರೆ ಜನರೂ ಅನುಸರಿಸುತ್ತಾರೆ.”ಕಾರ್ಯಕ್ರಮದಲ್ಲಿ ಪ್ರಜ್ಞಾವಂತ ವೇದಿಕೆ ಕಾರ್ಯದರ್ಶಿ ಚಿಕ್ಕಮ್ಮೇಗೌಡ, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಚಂದಗಾಲು ಶಿವಕುಮಾರ್, ಶಿವಲಿಂಗ ಚಾರ್, ಮಲ್ಲಿಕಾರ್ಜುನ್, ಮಹೇಶ್, ಸುಷ್ಮಾ ಮುಂತಾದವರು ಭಾಗವಹಿಸಿದ್ದರು.


Share This News